ಲಾರಿ ಮಗುಚಿ ಅಫಘಾತ, ವ್ಯಕ್ತಿಗೆ ಗಾಯ
ಚಾಲಕನ ಅಜಾಗರೂಕತೆಯಿಂದ ಲಾರಿಯೊಂದು ಮಗುಚಿ ಅಫಘಾತಕ್ಕೀಡಾದ ಘಟನೆ ಮಡಿಕೇರಿ ಸಮೀಪದ ಮದೆನಾಡು ಗ್ರಾಮದಲ್ಲಿ ನಡೆದಿದೆ. ಬನ್ನೂರಿನಿಂದ ಸುಳ್ಯ ಹಾಗೂ ಕಾಸರಗೋಡಿಗೆ ಅಕ್ಕಿ ಹಾಗೂ ಬೆಲ್ಲ ಸಾಗಿಸುತ್ತಿದ್ದ ಕೆಎಲ್-08-ಎಕೆ-7273
ರ ಈಚರ್ ಮಿನಿ
ಲಾರಿಯನ್ನು ಅದರ ಚಾಲಕ ಅಸ್ಫರ್
ಆಲಿಖಾನ್ರವರು ಚಾಲಿಸಿಕೊಂಡು ಮಡಿಕೇರಿ
ಮಾರ್ಗವಾಗಿ
ಸುಳ್ಯ
ಕಾಞಂಗಾಡಿಗೆ
ಹೋಗುತ್ತಿರುವಾಗ
ಈ ದಿನ 18-04-2013
ರಂದು ಬೆಳಗಿನ ಸಮಯ 08-00 ಎ ಎಂ
ಗೆ ಮದೆನಾಡು
ಎಂಬಲ್ಲಿ
ಸದರಿ
ಲಾರಿಯನ್ನು
ಅದರ ಚಾಲಕ ಅಸ್ಫರ್
ಆಲಿಖಾನ್ರವರು
ಅತೀ ವೇಗ ಹಾಗೂ
ಅಜಾಗರೂಕತೆಯಿಂದ
ಚಾಲನೆ ಮಾಡಿಕೊಂಡು
ಹೋಗಿ ರಸ್ತೆ
ಬದಿಯ ಮೋರಿಗೆ ಡಿಕ್ಕಿ
ಪಡಿಸಿದ ಪರಿಣಾಮ ಲಾರಿ ಮಗುಚಿ
ಬಿದ್ದಿದ್ದು ಲಾರಿಯ ಕ್ಲೀನರ್ ಮಂಡ್ಯ ಜಿಲ್ಲೆಯ ಬನ್ನೂರು ನಗರದ ನಿವಾಸಿ ಮುಕ್ತಾರ್ ಪಾಷಾ ಎಂಬವರ
ಎದೆಗೆ,
ಎಡಕಾಲಿನ ತೊಡೆ,
ಎಡಕಾಲಿನ ಮಂಡಿ,
ಎಡ ಕಾಳಿನ
ಮಣಿಗಂಟಿನ
ಮೇಲ್ಭಾಗಕ್ಕೆ
ಗಾಯ ನೋವುಂಟಾಗಿದ್ದು
ಲಾರಿ ಚಾಲಕ ಅಸ್ಫರ್
ಆಲಿ ಖಾನ್ರವರ
ಮೇಲೆ ಕಾನೂನು
ರೀತಿಯ ಕ್ರಮ
ಕೈಗೊಳ್ಳಬೇಕೆಂದು ನೀಡಿದ ದೂರಿಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಬ್ಯಾಂಕ್ ಕಳವಿಗೆ ವಿಫಲ ಯತ್ನ
ಬ್ಯಾಂಕೊಂದನ್ನು ಕಳವು ಮಾಡಲು ಯಾರೋ ಕಳ್ಳರು ವಿಫಲ ಯತ್ನ ನಡೆಸಿದ ಘಟನೆ ಮಡಿಕೇರಿ ಸಮೀಪದ ಮಕ್ಕಂದೂರು ಗ್ರಾಮದಲ್ಲಿ ನಡೆದಿದೆ. ಈ ದಿನ ದಿನಾಂಕ 18-04-2013
ರಂದು ಬೆಳಿಗ್ಗೆ
9-00 ಗಂಟೆಗೆ
ಮಕ್ಕಂದೂರಿನ ಕೆನರಾ ಬ್ಯಾಂಕ್ ಮ್ಯಾನೇಜರ್ ಡಿ.ಟಿ.ದೇವಿಕಲಾರವರು ಬ್ಯಾಂಕಿಗೆ
ಬಂದು ಬೀಗ ತೆಗೆದು
ಒಳಗಡೆ ಹೋಗಿ
ಸೈರನ್ ಆಫ್
ಮಾಡಿ ಒಳಗೆ
ಹೋದಾಗ ಫೈಲ್ನ್ನು
ಇಡುವ ರಾಕ್ ಪಕ್ಕಕ್ಕೆ
ತಳ್ಳಿದಂತಿದ್ದು,
ಕ್ಯಾಷ್
ರೂಂನ್ನು ನೋಡಲಾಗಿ
ಕ್ಯಾಶ್ ರೂಂನ
ಹಿಂದುಗಡೆಯ
ಗೋಡೆಯನ್ನು
ಕೊರೆದಿದ್ದು
ನಂತರ
ಹಿಂದುಗಡೆಯ
ಬಾಗಿಲು
ತೆರೆದಿರುವುದು ಕಂಡು ಬಂದಿರುತ್ತದೆ. ದಿನಾಂಕ 17-04-2013 ರ ರಾತ್ರಿ
ಯಾರೋ ಕಳ್ಳರು
ಹಿಂದುಗಡೆಯ
ಗೋಡೆಯನ್ನು ಕೊರೆದು
ಕಳ್ಳತನ ಮಾಡಲು
ಪ್ರಯತ್ನಿಸಿದ್ದು
ಹಣವಾಗಲೀ, ಕಂಪ್ಯೂಟರ್
ಮತ್ತು ಇತರ
ದಾಖಲಾತಿಗಳು ಕಳುವಾಗದೇ
ಇದ್ದು ಈ ಬಗ್ಗೆ
ಕಳ್ಳತನ ಮಾಡಲು ಪಯತ್ನ
ಪಟ್ಟ
ಕಳ್ಳರನ್ನು
ಪತ್ತೆ ಹಚ್ಚುವ ಬಗ್ಗೆ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಮನೆಯಲ್ಲಿಟ್ಟಿದ್ದ ಹಣ, ಆಭರಣ ಕಳವು
ಮನೆಯಲ್ಲಿಟ್ಟಿದ್ದ ಹಣ ಹಾಗೂ ಆಭರಣ ಕಳುವಾದ ಘಟನೆ ಮಡಿಕೇರಿ ಸಮೀಪದ ಮದೆನಾಡು ಗ್ರಾಮದಲ್ಲಿ ನಡೆದಿದೆ. ಮದೆನಾಡು
ಗ್ರಾಮದ ಬಿ.ಕೆ.ರಾಜೇಶ್ ಎಂಬವರು ತಮ್ಮ
ತಾಯಿಯವರೊಂದಿಗೆ
ವಾಸ ಮಾಡಿಕೊಂಡಿದ್ದು
ದಿನಾಂಕ 05-04-2012
ರಂದು ಹಂದಿ ಮರಿಗಳನ್ನು
ಮಾರಿದ ಹಣ ರೂ. 25,000=00
ಮತ್ತು ದಿನಾಂಕ
12-03-2013 ರಂದು 10 ಗ್ರಾಂ
ಚಿನ್ನದ
ಸರವನ್ನು ಮನೆಯ
ಕಬ್ಬಿಣದ
ಪೆಟ್ಟಿಗೆಯಲ್ಲಿ
ಇಟ್ಟಿದ್ದು ದಿನಾಂಕ
17-03-2013 ರಂದು
ಪೆಟ್ಟಿಗೆ
ತೆರೆದು
ನೋಡಿದಾಗ ಹಣವಾಗಲೀ,
ಚಿನ್ನವಾಗಲೀ
ಇರಲಿಲ್ಲವೆನ್ನಲಾಗಿದೆ. ಹಣ ಹಾಗೂ ಆಭರಣ ಸೇರಿ ಕಳುವಾದ ಮಾಲಿನ ಬೆಲೆ ಸುಮಾರು ರೂ. 45,000=00
ಆಗಿದ್ದು,
ಕಳವು ಮಾಲನ್ನು ಪತ್ತೆ
ಹಚ್ಚಿ ಕೊಡಬೇಕೇಂದು
ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಕಾಲು ಜಾರಿ ಕೆರೆಗೆ ಬಿದ್ದು ವ್ಯಕ್ತಿಯ ಸಾವು
ಸ್ನಾನ ಮಾಡುತ್ತಿದ್ದ ವ್ಯಕ್ತಿಯೊಬ್ಬ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು
ಸಾವಿಗೀಡಾದ ಘಟನೆ ವಿರಾಜಪೇಟೆ ಸಮೀಪದ ಕಂಡಂಗಾಲ ಗ್ರಾಮದ 1ನೇ ರುದ್ರಗುಪ್ಪೆಯಲ್ಲಿ
ನಡೆದಿದೆ. ದಿನಾಂಕ: 17-04-13 ರಂದು 1ನೇ ರುದ್ರಗುಪ್ಪೆಯ ನಿವಾಸಿ ಪಣಿಎರವರ ಮೊಣ್ಣ ರವರು ಮದ್ಯಾಹ್ನ ಸಮಯ 1-00ಗಂಟೆಗೆ ಮನೆಯ ಹತ್ತಿರವಿರುವ
ಕೆರೆಗೆ ಹೋಗಿ ಸ್ನಾನ ಮಾಡಿಕೊಂಡು ಬರುವುದಾಗಿ ಹೇಳಿ ಮನೆಯಿಂದ
ಹೋದವನು ಮನೆಗೆ ಬಾರದೆ ಇದ್ದು ಅಪರಾಹ್ನ
ವೇಳೆಗೆ ಕೆರೆಯ ಅಕ್ಕಪಕ್ಕದಲ್ಲಿ ಆಟವಾಡುತ್ತಿದ್ದ ಮಕ್ಕಳು ಬಂದು
ಮೊಣ್ಣರವರ ತಾಯಿ ಮಲ್ಲಿಗೆಯವರೊಂದಿಗೆ ಮೊಣ್ಣ ಕೆರೆಯಲ್ಲಿ ಸ್ನಾನ ಮಾಡುತ್ತಿದ್ದಾಗ
ಆಕಸ್ಮಿಕವಾಗಿ ಕಾಲು ಜಾರಿ
ಕೆರೆಗೆ ಬಿದ್ದಿರುವುದಾಗಿ
ವಿಷಯ ತಿಳಿಸಿದ್ದು ಕೂಡಲೇ ಮೊಣ್ಣನನ್ನು ನೀರಿನಿಂದ ಹೊರಗೆ ತೆಗೆದು ಆತನನ್ನು
ಚಿಕಿತ್ಸೆ ಬಗ್ಗೆ ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲುಪಡಿಸಿ, ನಂತರ ವೈದ್ಯರ ಸಲಹೆ
ಮೇರೆ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲುಪಡಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೊಣ್ಣ
ಸಂಜೆ ಸಮಯ 6-30
ಗಂಟೆಗೆ
ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಪತಿಯಿಂದ ದೈಹಿಕ ಕಿರುಕುಳ, ಪ್ರಕರಣ ದಾಖಲು
ಪತ್ನಿಗೆ ಪತಿಯು ವಿನಾ ಕಾರಣ ದೈಹಿಕ ಕಿರುಕುಳ ನೀಡುತ್ತಿರುವ ಪ್ರಕರಣ ಮಡಿಕೇರಿ ನಗರದ ಚಾಮುಂಡೇಶ್ವರಿ ನಗರದಿಂದ ವರದಿಯಾಗಿದೆ. ನಗರದ ಅರುಣ ಸ್ಟೋರ್ಸ್ ನಲ್ಲಿ ಉದ್ಯೋಗಿಯಾಗಿರುವ ಚಾಮುಂಡೇಶ್ವರಿ ನಗರದ ನಿವಾಸಿ ರತ್ನ ಕುಮಾರಿ ಎಂಬವರು ಕುಮಾರ ಎಂಬವರನ್ನು 22 ವರ್ಷಗಳ ಹಿಂದೆ ಮದುವೆಯಾಗಿದ್ದು, ಈಗ್ಗೆ 2 ವರ್ಷಗಳಿಂದ ಪತಿ ಕುಮಾರನು ಮದ್ಯಪಾನ ಮಾಡಿಕೊಂಡು
ಬಂದು ಪತ್ನಿ ರತ್ನಕುಮಾರಿಗೂ ಮತ್ತು ಮಕ್ಕಳಿಗೂ ದೈಹಿಕವಾಗಿ
ಹಾಗೂ ಮಾನಸಿಕವಾಗಿ ತೊಂದರೆ ಕೊಡುತ್ತಿದ್ದರು, ದಿನಾಂಕ 17/04/2013 ರಂದು ರತ್ನಕುಮಾರಿಯವರು ಮನೆಯಲ್ಲಿಲ್ಲದ ಸಮಯದಲ್ಲಿ ಅವರ ಬಟ್ಟೆಗಳನ್ನು ಎಳೆದು ಹೊರಗೆ ಹಾಕಿ, ಕೇಳಿದಾಗ ರತ್ನಕುಮಾರಿಯವರ ಜುಟ್ಟನ್ನು ಹಿಡಿದು ಎಳೆದು ನೋವು ಪಡಿಸಿ ದೈಹಿಕ ಹಿಂಸೆ ನೀಡಿರುವುದಾಗಿ ನೀಡಿದದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಬೈಕಿಗೆ ಕಾರು ಡಿಕ್ಕಿ, ಬೈಕ್ ಸವಾರನಿಗೆ ಗಾಯ
ಮೋಟಾರು ಬೈಕಿಗೆ ಕಾರು ಡಿಕ್ಕಿಯಾಗಿ ಬೈಕ್ ಸವಾರನಿಗೆ ಗಾಯಗಳಾದ ಘಟನೆ ಮಡಿಕೇರಿ ನಗರದ ಅರಣ್ಯ ಭವನದ ಬಳಿ ನಡೆದಿದೆ. ದಿನಾಂಕ 17/04/2013ರಂದು ಸುಂಟಿಕೊಪ್ಪದ ಗದ್ದೆಹಳ್ಳ ಬಳಿಯ ನಿವಾಸಿ ಹಮೀದ್ ಎಂಬವರು ವುಡ್ ಪಾಲಿಷ್ ಕೆಲಸ ಮುಗಿಸಿಕೊಂಡು ಅವರ ಸಹಾಯಕ ನೌಫೆಲ್ ಎಂಬಾತನೊಂದಿಗೆ ಅವರ ಮೋಟಾರು ಸೈಕಲ್ ಸಂಖ್ಯೆ ಕೆಎ-12-ಕೆ-32ರಲ್ಲಿ ಸುಂಟಿಕೊಪ್ಪದ ಕಡೆಗೆ ಹೋಗುತ್ತಿರುವಾಗ ನರದ ಮೈಸೂರು ರಸ್ತೆಯ ಅರಣ್ಯ ಭವನದ ಬಳಿ ಸುಂಟಿಕೊಪ್ಪ ಕಡೆಯಿಂದ ಒಂದು ಮಾರುತಿ ಓಮ್ನಿ ವ್ಯಾನು ಸಂ.ಕೆಎ-02-ಎಂ-2758ನ್ನು ಅದರ ಚಾಲಕ ಸಯಾನಂದ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಹಮೀದ್ರವರ ಮೋಟಾರು ಬೈಕಿಗೆ ಡಿಕ್ಕಿ ಪಡಿಸಿದ ಪರಿಣಾಮ ಹಮೀದ್ರವರಿಗೆ ಗಾಯಗಳಾದ ಬಗ್ಗೆ ನೀಡಿದ ದೂರಿನೆ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಮಾನಸಿಕ ಕಿರುಕುಳ,ವ್ಯಕ್ತಿಯ ಆತ್ಮಹತ್ಯೆ
ಎಸ್ಟೇಟ್ ಉದ್ಯೋಗಿಯೊಬ್ಬರು ನೇಣು ಬಿಗಿದುಕೊಂಡು ಆತ್ನಹತ್ಯೆ ಮಾಡಿಕೊಂಡ ಘಟನೆ ಕುಟ್ಟ ಬಳಿಯ ನಾಲ್ಕೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 17/04/2013ರಂದು ಕುಟ್ಟದ ನಾಲ್ಕೇರಿ ಗ್ರಾಮದ ಎನ್ & ಎನ್ ಎಸ್ಟೇಟಿನಲ್ಲಿ ಮ್ಯಾನೇಜರ್ ಕೆಲಸ ಮಾಡಿಕೊಂಡಿದ್ದ ಮತ್ರಂಡ ಎ ಮಾಚಯ್ಯ ಎಂಬವರು ತಮ್ಮ ಮನೆಯ ಮಾಡಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಅದೇ ಎಸ್ಟೇಟಿನಲ್ಲಿ ವಿಸಿಟಿಂಗ್ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದ ಕೊಳುವಂಡ ಕಾರ್ಯಪ್ಪ ಎಂಬವರು ನೀಡುತ್ತಿದ್ದ ಮಾನಸಿಕ ಹಿಂಸೆಯಿಂದಾಗಿ ಬೇಸರಗೊಂಡು ಮಾಚಯ್ಯನವರು ಆತ್ಮಹತ್ಯೆ ಮಾಡಿಕೊಂಡಿದ್ದು ತಂದೆಯ ಸಾವಿಗೆ ಕಾರ್ಯಪ್ಪನವರೇ ಕಾರಣ ಎಂಬುದಾಗಿ ಮಾಚಯ್ಯನವರ ಮಗಳು ಡೆರಿನ್ ದೇವಯ್ಯ ಎಂಬವರು ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಮಹಿಳೆಗೆ ಕಿರುಕುಳ, ಪ್ರಕರಣ ದಾಖಲು
ವಿವಾಹಿತ ಮಹಿಳೆಯೊಬ್ಬರಿಗೆ ಪತಿ ಹಾಗೂ ಆತನ ಕುಟುಂಬದವರು ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ನಾಪೋಕ್ಲು ಸಮೀಪದ ಬಲ್ಲಮಾವಟಿ ಗ್ರಾಮದ ಅಮ್ಮಂಡ ಕಾವ್ಯ ಎಂಬವರು ದಿನಾಂಕ 17-05-2012 ರಂದು ಅಮ್ಮಂಡ ಪ್ರಸಾದ್ಕುಮಾರ್ ಯಾನೆ ಪ್ರಸಾದ್
ರವರನ್ನು ತಂದೆ ತಾಯಿ ಮತ್ತು ಸಂಬಂಧಿಕರ ಸಮ್ಮುಖದಲ್ಲಿ ಮದುವೆಯಾಗಿದ್ದು, ಮದುವೆಯಾಗಿ
15 ದಿನಗಳ ಕಾಲ ಇಬ್ಬರೂ ಅನ್ಯೋನ್ಯವಾಗಿದ್ದು, ನಂತರದಿಂದ
ಗಂಡ ಪ್ರಸಾದ್, ಮಾವ ಪೊನ್ನಪ್ಪ
ಹಾಗೂ ಅತ್ತೆ ಚೋಂದಕ್ಕಿ ರವರು ಕಾವ್ಯರವರೊಂದಿಗೆ ವಿನಾಃ ಕಾರಣ ಜಗಳವಾಡುತ್ತಿದ್ದರು ಹಾಗೂ ಹೊಡೆದು ದೈಹಿಕ ಮತ್ತು ಮಾನಸಿಕ
ಹಿಂಸೆ ನೀಡುತ್ತಿದ್ದರೆನ್ನಲಾಗಿದೆ. ದಿನಾಂಕ 16-04-2013 ರಂದು ಸಂಜೆ ಗಂಡ ಪ್ರಸಾದ್ ಕಾವ್ಯರವರೊಂದಿಗೆ ಜಗಳ ತೆಗೆದು ಮನೆಯಿಂದ
ಹೋಗುವಂತೆ ಒತ್ತಾಯಿಸಿ ಅವರ ತಂದೆ ತಾಯಿಯವರ ಮಾತನ್ನು ಕೇಳಿ ಆಕೆಗೆ ಕೈಯಿಂದ ಬೆನ್ನಿಗೆ ಹೊಡದು, ಎರಡೂ ಕೈಗಳನ್ನು
ತಿರುಗಿಸಿ ಕಾಲಿನಿಂದ ಒದ್ದು ನೋವುಂಟು ಮಾಡಿದ್ದು ಈ ರೀತಿಯ ಮಾನಸಿಕ ಮತ್ತು ದೈಹಿಕವಾಗಿ ಕೊಡುವ ಹಿಂಸೆಯನ್ನು ತಾಳಲಾರದೆ ದಿನಾಂಕ 17/04/2013ರ ಬೆಳಗ್ಗೆ ಆಕೆ
ಸ್ವಲ್ಪ ವಿಷದ ಔಷಧಿಯನ್ನು ಸೇವಿಸಿದರೆನ್ನಲಾಗಿದೆ. ಕಾವ್ಯರವರಿಗೆ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ
ನೀಡಿದ ಗಂಡ, ಮಾವ ಮತ್ತು
ಅತ್ತೆ ಯವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ಕಳವು
ಮನೆಯ ಮುಂದೆ ನಿಲ್ಲಿಸಿದ್ದ ಮೋಟಾರು ಬೈಕ್ ಕಳುವಾದ ಪ್ರಕರಣ ಮಡಿಕೇರಿ ನಗರದ ಗೌಳಿ ಬೀದಿಯಲ್ಲಿ ನಡೆದಿದೆ. ಮಡಿಕೇರಿ ನಗರದ ಗೌಳಿ ಬೀದಿ ನಿವಾಸಿ ಐತಪ್ಪ ನಾಯ್ಕ ಎಂಬವರು ದಿನಾಂಕ
16-4-2013 ರಂದು ಸಮಯ
ರಾತ್ರಿ 9.00 ಗಂಟೆಗೆ ಅವರ ವಾಸದ ಮನೆಯ
ಮುಂದೆ ಅವರ ಬಾಪ್ತು
ಕಪ್ಪು ಬಣ್ಣದ ಕೆಎ-12-ಜೆ-2341 ರ ಬಜಾಜ್
ಪಲ್ಸರ್ ಬೈಕನ್ನು
ನಿಲ್ಲಿಸಿದ್ದು, ದಿ: 17-4-2013 ರಂದು ಬೆಳಿಗ್ಗೆ
6.30 ಗಂಟೆಗೆ
ನೋಡುವಾಗ ಬೈಕು
ಕಾಣೆಯಾಗಿದ್ದು, ಯಾರೋ ಕಳ್ಳರು ನಿಲ್ಲಿಸಿದ್ದ
ಬೈಕನ್ನು ಕಳವು ಮಾಡಿಕೊಂಡು
ಹೋಗಿದ್ದು, ಇದರ ಅಂದಾಜು ಬೆಲೆ
40000-00 ರೂ ಆಗಿದ್ದು, ಪತ್ತೆ ಮಾಡಿಕೊಡಬೇಕೆಂದು
ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.