ಕಾರು ಅಪಘಾತ, ಚಾಲಕನಿಗೆ ಗಾಯ:
ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿ ಮಗುಚಿಬಿದ್ದು ಚಾಲಕ ಗಾಯಗೊಂಡ ಘಟನೆ ಶ್ರೀಮಂಗಲ ಸಮೀಪದ ದಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 28/01/2015 ರಂದು ಕಾನೂರು ಗ್ರಾಮದ ಸಿ.ಎಎಸ್. ಗಣಪತಿ ಎಂಬವರು ಶ್ರೀಮಂಗಲ ಠಾಣಾ ಸರಹದ್ದಿನ ಕಾನೂರು – ಪೊನ್ನಂಪೇಟೆ ರಸ್ತೆಯಲ್ಲಿ ಹೋಗುತ್ತಿದ್ದಾಗ ಸಮಯ 06:45 ಗಂಟೆಗೆ ರಸ್ತೆ ತಿರುವಿನಲ್ಲಿ ಕಾರನ್ನು ನಿರ್ಲಕ್ಷತನದಿಂದ ಓಡಿಸಿದ್ದರಿಂದ ಹತೋಟಿ ತಪ್ಪಿ ರಸ್ತೆಯ ಬಲಬಾಗಕ್ಕೆ ಮಗುಚಿ ಬಿದ್ದಿದ್ದು ಚಾಲಕ ಗಣಪತಿಯವರು ಗಾಯಗೊಂಡಿದ್ದು, ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೇಷದ ಹಿನ್ನೆಲೆ ದಾರಿತಡೆದು ಮಹಿಳೆ ಮೇಲೆ ಹಲ್ಲೆ:
ಹಳೇ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ಮಹಿಳೆಯ ದಾರಿ ತಡೆದು ಹಲ್ಲೆ ನಡೆಸಿದ ಘಟನೆ ಗರ್ವಾಲೆ ಗ್ರಾಮದಿಂದ ವರದಿಯಾಗಿದೆ. ಪಿರ್ಯಾದಿ ಶ್ರೀಮತಿ ವಿಣಾ @ ವನಜಾಕ್ಷಿ, ಗರ್ವಾಲೆ ಗ್ರಾಮ, ಸೋಮವಾರಪೇಟೆ ತಾಲೋಕು ಇವರು ದಿನಾಂಕ 30-1-2015 ರಂದು ಸಮಯ 03:30 ಪಿ. ಎಂ.ಗೆ ದನಗಳನ್ನು ಕಟ್ಟಲು ಕೊಟ್ಟಿಗೆಯ ಹತ್ತಿರ ಹೋಗುವಾಗ ಅವರ ಕುಟುಂಬದ ಟಿ,ಎಸ್, ಈರಪ್ಪ ಎಂಬುವವರ ಗದ್ದೆಯ ಸಮೀಪ ಟಿ.ಎಸ್.ತಿಮ್ಮಯ್ಯ ಎಂಬವರು ಹಳೆ ದ್ವೇಷದಿಂದ ಫಿರ್ಯಾದಿಯನ್ನು ದಾರಿ ತಡೆದು ಜಗಳ ಮಾಡಿ ಕೈಯ್ಯಲ್ಲಿದ್ದ ಕತ್ತಿಯಿಂದ ತಲೆಯ ಭಾಗಕ್ಕೆ ಕಡಿದು ಗಾಯಪಡಿಸಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ದಾರಿ ತಡೆದು ವ್ಯಕ್ತಿ ಮೇಲೆ ಗುಂಪಿನಿಂದ ಹಲ್ಲೆ:
ಜಾನುವಾರುಗಳನ್ನು ಸಾಗಿಸುತ್ತಿದ್ದ ವೇಳೆ ದಾರಿ ತಡೆದು ವ್ಯಕ್ತಿಯ ಮೇಲೆ ಗುಂಪಿನಿಂದ ಹಲ್ಲೆ ನಡೆದ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ವರದಿಯಾಗಿದೆ. ಕಾಸರಗೋಡುವಿನ ಬದಿಯಡ್ಕ ನಿವಾಸಿ ಲಿಜೋ ಜಾರ್ಜ್ ರವರು ದಿನಾಂಕ 29-01-2015 ರಂದು ಸ್ನೇಹಿತ ಸಿಬಿ ಎಂಬುವವರ ಮುಖಾಂತರ ಸಂಪಾಜೆಯ ಸುಧಾಕರ ಎಂಬುವವರ ಬಾಪ್ತು 2 ಹಸುಗಳು ಮತ್ತು 1 ಕರುವನ್ನು ಖರೀದಿ ಮಾಡಿದ್ದು ಅವುಗಳನ್ನು ಬದಿಯಡ್ಕ ಸಾಗಿಸಲು ಫಿರ್ಯಾದಿ ಪುತ್ತೂರಿನ ಈಶ್ವರ ಮಂಗಲದ ವಾಸಿ ಮೊಹಮ್ಮದ್ ಶರೀಫ್ರವರು ಚಾಲಕನಾಗಿ ಲಿಜೋರವರ ಓಮಿನಿ ವ್ಯಾನು ನಂ ಕೆಎಲ್-14-ಡಿ-9491 ರಲ್ಲಿ 8-30 ಗಂಟೆಗೆ ಈಶ್ವರಮಂಗಲದಿಂದ ಬಂದು ಸುಧಾಕರವರ ಮನೆಯಿಂದ ದನಗಳನ್ನು ಓಮಿನಿ ವ್ಯಾನಿಗೆ ಹತ್ತಿಸಿ, ರಾತ್ರಿ ಸಮಯ ಸುಮಾರು 10-30 ಗಂಟೆಗೆ ಹೊರಟು ಸುದಾಕರನವರ ಮನೆಯ ಗೇಟಿನ ಬಳಿ ತಲುಪಿದಾಗ ಸುಧಾಕರ, ಯೋಗೇಶ್, ಸುರೇಶ, ಶ್ರೀನಿವಾಸ ಹಾಗೂ ಇತರರು ಪಿರ್ಯಾದಿಯವರನ್ನು ದಾರಿ ತಡೆದು ವಾಹನದಿಂದ ಬಲಾತ್ಕಾರವಾಗಿ ಕೆಳಗೆ ಇಳಿಸಿ ಅವರ ಕೈಗಳಲ್ಲಿದ್ದ ದೊಣ್ಣೆಗಳಿಂದ ಹಲ್ಲೆ ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಅಕ್ರಮ ಜಾನುವಾರುಗಳ ಸಾಟಾಟಕ್ಕೆ ಯತ್ನ, ಆರೋಪಿಗಳ ಬಂಧನ:
ಅಕ್ರಮ ಗೋವುಗಳನ್ನು ಸಾಗಿಸುತ್ತಿದ್ದುದನ್ನು ಪತ್ತೆ ಹಚ್ಚಿದ ಕುಟ್ಟ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆಡುಕೊಂಡಿರುತ್ತಾರೆ. ದಿನಾಂಕ 30-01-2015 ರಂದು ಸಮಯ ಬೆಳಿಗ್ಗೆ 04.30 ಗಂಟೆಗೆ ಕುಟ್ಟ ಠಾಣಾ ಸರಹದ್ದಿನ ಕುಟ್ಟ ಹಳೆಯ ಚೆಕ್ ಪೋಸ್ಟ್ ಬಳಿ ಆರೋಪಿಗಳಾಧ ಕೇರಳ ರಾಜ್ಯದ ತೋಲ್ಪಟ್ಟಿ ವಾಸಿಗಳಾದ ಮುಸ್ತಾಫ, ಮುನೀರ್ ಮತ್ತು ಸಮ್ನಾದ್ ಎಂಬವವರು ಸರ್ಕಾರದ ಯಾವುದೇ ಪರವಾನಿಗೆ ಇಲ್ಲದೆ ರೂ. 30,000=00 ಬೆಲೆಯ ಮೂರು ಜಾನುವಾರುಗಳನ್ನು ಅಕ್ರಮವಾಗಿ ಕೇರಳ ರಾಜ್ಯದ ಕಸಾಯಿಖಾನೆಗೆ ಮಾರಾಟ ಮಾಡಿ ಹಣಗಳಿಸುವ ಉದ್ದೇಶದಿಂದ ಕಾಲ್ನಡಿಗೆಯಲ್ಲಿ ಸಾಗಾಟ ಮಾಡುತ್ತಿದ್ದುದನ್ನು ಕುಟ್ಟಪೊಲೀಸ್ ಠಾಣಾಪಿ.ಎಸ್.ಐ. ರವರಾದ ಶ್ರೀ ಜೆ. ಮಂಜು ರವರು ಪತ್ತೆ ಹಚ್ಚಿ ಜಾನುವಾರುಗಳನ್ನು ವಶಕ್ಕೆ ತೆಗೆದುಕೊಂಡು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿ ಮಗುಚಿಬಿದ್ದು ಚಾಲಕ ಗಾಯಗೊಂಡ ಘಟನೆ ಶ್ರೀಮಂಗಲ ಸಮೀಪದ ದಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 28/01/2015 ರಂದು ಕಾನೂರು ಗ್ರಾಮದ ಸಿ.ಎಎಸ್. ಗಣಪತಿ ಎಂಬವರು ಶ್ರೀಮಂಗಲ ಠಾಣಾ ಸರಹದ್ದಿನ ಕಾನೂರು – ಪೊನ್ನಂಪೇಟೆ ರಸ್ತೆಯಲ್ಲಿ ಹೋಗುತ್ತಿದ್ದಾಗ ಸಮಯ 06:45 ಗಂಟೆಗೆ ರಸ್ತೆ ತಿರುವಿನಲ್ಲಿ ಕಾರನ್ನು ನಿರ್ಲಕ್ಷತನದಿಂದ ಓಡಿಸಿದ್ದರಿಂದ ಹತೋಟಿ ತಪ್ಪಿ ರಸ್ತೆಯ ಬಲಬಾಗಕ್ಕೆ ಮಗುಚಿ ಬಿದ್ದಿದ್ದು ಚಾಲಕ ಗಣಪತಿಯವರು ಗಾಯಗೊಂಡಿದ್ದು, ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೇಷದ ಹಿನ್ನೆಲೆ ದಾರಿತಡೆದು ಮಹಿಳೆ ಮೇಲೆ ಹಲ್ಲೆ:
ಹಳೇ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ಮಹಿಳೆಯ ದಾರಿ ತಡೆದು ಹಲ್ಲೆ ನಡೆಸಿದ ಘಟನೆ ಗರ್ವಾಲೆ ಗ್ರಾಮದಿಂದ ವರದಿಯಾಗಿದೆ. ಪಿರ್ಯಾದಿ ಶ್ರೀಮತಿ ವಿಣಾ @ ವನಜಾಕ್ಷಿ, ಗರ್ವಾಲೆ ಗ್ರಾಮ, ಸೋಮವಾರಪೇಟೆ ತಾಲೋಕು ಇವರು ದಿನಾಂಕ 30-1-2015 ರಂದು ಸಮಯ 03:30 ಪಿ. ಎಂ.ಗೆ ದನಗಳನ್ನು ಕಟ್ಟಲು ಕೊಟ್ಟಿಗೆಯ ಹತ್ತಿರ ಹೋಗುವಾಗ ಅವರ ಕುಟುಂಬದ ಟಿ,ಎಸ್, ಈರಪ್ಪ ಎಂಬುವವರ ಗದ್ದೆಯ ಸಮೀಪ ಟಿ.ಎಸ್.ತಿಮ್ಮಯ್ಯ ಎಂಬವರು ಹಳೆ ದ್ವೇಷದಿಂದ ಫಿರ್ಯಾದಿಯನ್ನು ದಾರಿ ತಡೆದು ಜಗಳ ಮಾಡಿ ಕೈಯ್ಯಲ್ಲಿದ್ದ ಕತ್ತಿಯಿಂದ ತಲೆಯ ಭಾಗಕ್ಕೆ ಕಡಿದು ಗಾಯಪಡಿಸಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ದಾರಿ ತಡೆದು ವ್ಯಕ್ತಿ ಮೇಲೆ ಗುಂಪಿನಿಂದ ಹಲ್ಲೆ:
ಜಾನುವಾರುಗಳನ್ನು ಸಾಗಿಸುತ್ತಿದ್ದ ವೇಳೆ ದಾರಿ ತಡೆದು ವ್ಯಕ್ತಿಯ ಮೇಲೆ ಗುಂಪಿನಿಂದ ಹಲ್ಲೆ ನಡೆದ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ವರದಿಯಾಗಿದೆ. ಕಾಸರಗೋಡುವಿನ ಬದಿಯಡ್ಕ ನಿವಾಸಿ ಲಿಜೋ ಜಾರ್ಜ್ ರವರು ದಿನಾಂಕ 29-01-2015 ರಂದು ಸ್ನೇಹಿತ ಸಿಬಿ ಎಂಬುವವರ ಮುಖಾಂತರ ಸಂಪಾಜೆಯ ಸುಧಾಕರ ಎಂಬುವವರ ಬಾಪ್ತು 2 ಹಸುಗಳು ಮತ್ತು 1 ಕರುವನ್ನು ಖರೀದಿ ಮಾಡಿದ್ದು ಅವುಗಳನ್ನು ಬದಿಯಡ್ಕ ಸಾಗಿಸಲು ಫಿರ್ಯಾದಿ ಪುತ್ತೂರಿನ ಈಶ್ವರ ಮಂಗಲದ ವಾಸಿ ಮೊಹಮ್ಮದ್ ಶರೀಫ್ರವರು ಚಾಲಕನಾಗಿ ಲಿಜೋರವರ ಓಮಿನಿ ವ್ಯಾನು ನಂ ಕೆಎಲ್-14-ಡಿ-9491 ರಲ್ಲಿ 8-30 ಗಂಟೆಗೆ ಈಶ್ವರಮಂಗಲದಿಂದ ಬಂದು ಸುಧಾಕರವರ ಮನೆಯಿಂದ ದನಗಳನ್ನು ಓಮಿನಿ ವ್ಯಾನಿಗೆ ಹತ್ತಿಸಿ, ರಾತ್ರಿ ಸಮಯ ಸುಮಾರು 10-30 ಗಂಟೆಗೆ ಹೊರಟು ಸುದಾಕರನವರ ಮನೆಯ ಗೇಟಿನ ಬಳಿ ತಲುಪಿದಾಗ ಸುಧಾಕರ, ಯೋಗೇಶ್, ಸುರೇಶ, ಶ್ರೀನಿವಾಸ ಹಾಗೂ ಇತರರು ಪಿರ್ಯಾದಿಯವರನ್ನು ದಾರಿ ತಡೆದು ವಾಹನದಿಂದ ಬಲಾತ್ಕಾರವಾಗಿ ಕೆಳಗೆ ಇಳಿಸಿ ಅವರ ಕೈಗಳಲ್ಲಿದ್ದ ದೊಣ್ಣೆಗಳಿಂದ ಹಲ್ಲೆ ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಅಕ್ರಮ ಜಾನುವಾರುಗಳ ಸಾಟಾಟಕ್ಕೆ ಯತ್ನ, ಆರೋಪಿಗಳ ಬಂಧನ:
ಅಕ್ರಮ ಗೋವುಗಳನ್ನು ಸಾಗಿಸುತ್ತಿದ್ದುದನ್ನು ಪತ್ತೆ ಹಚ್ಚಿದ ಕುಟ್ಟ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆಡುಕೊಂಡಿರುತ್ತಾರೆ. ದಿನಾಂಕ 30-01-2015 ರಂದು ಸಮಯ ಬೆಳಿಗ್ಗೆ 04.30 ಗಂಟೆಗೆ ಕುಟ್ಟ ಠಾಣಾ ಸರಹದ್ದಿನ ಕುಟ್ಟ ಹಳೆಯ ಚೆಕ್ ಪೋಸ್ಟ್ ಬಳಿ ಆರೋಪಿಗಳಾಧ ಕೇರಳ ರಾಜ್ಯದ ತೋಲ್ಪಟ್ಟಿ ವಾಸಿಗಳಾದ ಮುಸ್ತಾಫ, ಮುನೀರ್ ಮತ್ತು ಸಮ್ನಾದ್ ಎಂಬವವರು ಸರ್ಕಾರದ ಯಾವುದೇ ಪರವಾನಿಗೆ ಇಲ್ಲದೆ ರೂ. 30,000=00 ಬೆಲೆಯ ಮೂರು ಜಾನುವಾರುಗಳನ್ನು ಅಕ್ರಮವಾಗಿ ಕೇರಳ ರಾಜ್ಯದ ಕಸಾಯಿಖಾನೆಗೆ ಮಾರಾಟ ಮಾಡಿ ಹಣಗಳಿಸುವ ಉದ್ದೇಶದಿಂದ ಕಾಲ್ನಡಿಗೆಯಲ್ಲಿ ಸಾಗಾಟ ಮಾಡುತ್ತಿದ್ದುದನ್ನು ಕುಟ್ಟಪೊಲೀಸ್ ಠಾಣಾಪಿ.ಎಸ್.ಐ. ರವರಾದ ಶ್ರೀ ಜೆ. ಮಂಜು ರವರು ಪತ್ತೆ ಹಚ್ಚಿ ಜಾನುವಾರುಗಳನ್ನು ವಶಕ್ಕೆ ತೆಗೆದುಕೊಂಡು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.