ಅಕ್ರಮ ಜೂಜಾಟ
ದಿನಾಂಕ 19-2-2017 ರಂದು ಕುಶಾಲನಗರದ ಸುಂದರನಗರ ಗ್ರಾಮದಲ್ಲಿ ಇಸ್ಪೇಟು ಎಲೆಗಳಿಂದ ಜೂಜಾಟ ಆಡುತ್ತಿದ್ದ ಸ್ಥಳಕ್ಕೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಮಹೇಶ್ ಮತ್ತು ಸಿಬ್ಬಂದಿಯವರು ದಾಳಿ ಮಾಡಿ 5 ಜನ ಆರೋಪಿಗಳನ್ನು ಹಾಗೂ 3,220 ರೂ ಹಣವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ಕಾರಿಗೆ ಲಾರಿ ಡಿಕ್ಕಿ
ದಿನಾಂಕ 19-2-2017 ರಂದು ಮಂಗಳೂರಿನ ಬಿಜೈನ ನಿವಾಸಿ ಶ್ರೇಯಸ್ ಕೆ ಭಟ್ ರವರು ತಮ್ಮ ತಂದೆ ಮತ್ತು ತಾಯಿಯವರೊಂದಿಗೆ ಕಾರಿನಲ್ಲಿ ಮಂಳೂರಿನಿಂದ ಮೈಸೂರಿಗೆ ಹೋಗುತ್ತಿರುವಾಗ ಕಾಟಕೇರಿಯ ತಿರುವು ರಸ್ತೆಯಲ್ಲಿ ಎದುರುಗಡೆಯಿಂದ ಬಂದ ಲಾರಿಯನ್ನು ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಕಾರಿಗೆ ಡಿಕ್ಕಿ ಪಡಿಸಿದ್ದು, ಶ್ರೇಯಸ್ ರವರ ತಂದೆ ತಾಯಿಯವರಿಗೆ ಗಾಯವಾಗಿದ್ದು ಈ ಬಗ್ಗೆ ಶ್ರೇಯಸ್ ರವರು ನೀಡಿದ ದೂರಿಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.